ಅನಂತಾನಂತ ವಿಶ್ವದೊಳು
ಅಕಾಲ ಮಹಾಕಾಲ ಆದಿನಾಥ
ಮಹಾಯೋಗಿ ಮಹಾದೇವನ
ದಯೆಯನ್ನು ಪಡೆಯುವ ಆನಂದವೇ
ಪರಮಾನಂದ ಬ್ರಹ್ಮಾನಂದ
ನಿನ್ನ ಕೃಪೆಯನ್ನು ಪಡೆದ
ನಿನ್ನ ಆಶ್ರಯದೊಳು
ನಿನ್ನ ಜಪವ ಮಾಡುತಿರುವ
ಶಿವ ಭಕ್ತರಿಗೆ ನಮೋ ನಮಃ
ಓಂ ನಮಃ ಶಿವಾಯ್
ಎಂದಾಗ ಹುಟ್ಟುವ
ಈ ವಿದ್ಯುತ್ ತರಂಗಗಳ
ಅನುಭವಿಸುವುದೇ ಸುಯೋಗ
ಭಕ್ತಿಯಿಂದಾದರು ಸರಿ
ಜ್ಞಾನದಿಂದಾದರು ಸರಿ
ನಿನ್ನ ಅರೆಸಿ ಬರುವ
ದೀನ ಆತ್ಮಗಳಿಗೆ
ನಿನ್ನ ವಿಶಾಲ ಹೃದಯದೊಳು
ಎಂದೂ ನಿಷೇದವಿಲ್ಲ
ಅಸುರ ಸುರರೆಂಬ ಭೇದವಿಲ್ಲದೆ
ಭಕ್ತಿಗೆ ಮನಸೋತು
ಆತ್ಮ ಲಿಂಗವನ್ನೂ ಕೊಟ್ಟ
ಮಹಾದಾನಿ ನೀನು
ದೇಹದೊಳು ಜೀವ ತುಂಬಿದಮೇಲೆ
ಸಾವೊಂದೇ ಸತ್ಯ
ಅದನ್ನ ಅರಿತವನೇ ನಿನ್ನ ಭಕ್ತ
ಸದಾ ನಿನ್ನ ನಾಮವ ಜಪಿಸುತ
ಭಕ್ತಿಯ ಮಾಯೆಯೊಳು
ಭಾವ ಸಮಾಧಿಯಲ್ಲಿ ಕಳೆದೋದ
ನಿನ್ನ ಭಕ್ತರಿಗೆ ಈ
ಮಹಾಶಿವರಾತ್ರಿಯಲ್ಲಿ ಮಂಗಳವಾಗಲಿ
- ಶಶಾಂಕ್ ಕೆ ಡಿ (೨೭-೦೨-೧೪)
ಅಕಾಲ ಮಹಾಕಾಲ ಆದಿನಾಥ
ಮಹಾಯೋಗಿ ಮಹಾದೇವನ
ದಯೆಯನ್ನು ಪಡೆಯುವ ಆನಂದವೇ
ಪರಮಾನಂದ ಬ್ರಹ್ಮಾನಂದ
ನಿನ್ನ ಕೃಪೆಯನ್ನು ಪಡೆದ
ನಿನ್ನ ಆಶ್ರಯದೊಳು
ನಿನ್ನ ಜಪವ ಮಾಡುತಿರುವ
ಶಿವ ಭಕ್ತರಿಗೆ ನಮೋ ನಮಃ
ಓಂ ನಮಃ ಶಿವಾಯ್
ಎಂದಾಗ ಹುಟ್ಟುವ
ಈ ವಿದ್ಯುತ್ ತರಂಗಗಳ
ಅನುಭವಿಸುವುದೇ ಸುಯೋಗ
ಭಕ್ತಿಯಿಂದಾದರು ಸರಿ
ಜ್ಞಾನದಿಂದಾದರು ಸರಿ
ನಿನ್ನ ಅರೆಸಿ ಬರುವ
ದೀನ ಆತ್ಮಗಳಿಗೆ
ನಿನ್ನ ವಿಶಾಲ ಹೃದಯದೊಳು
ಎಂದೂ ನಿಷೇದವಿಲ್ಲ
ಅಸುರ ಸುರರೆಂಬ ಭೇದವಿಲ್ಲದೆ
ಭಕ್ತಿಗೆ ಮನಸೋತು
ಆತ್ಮ ಲಿಂಗವನ್ನೂ ಕೊಟ್ಟ
ಮಹಾದಾನಿ ನೀನು
ದೇಹದೊಳು ಜೀವ ತುಂಬಿದಮೇಲೆ
ಸಾವೊಂದೇ ಸತ್ಯ
ಅದನ್ನ ಅರಿತವನೇ ನಿನ್ನ ಭಕ್ತ
ಸದಾ ನಿನ್ನ ನಾಮವ ಜಪಿಸುತ
ಭಕ್ತಿಯ ಮಾಯೆಯೊಳು
ಭಾವ ಸಮಾಧಿಯಲ್ಲಿ ಕಳೆದೋದ
ನಿನ್ನ ಭಕ್ತರಿಗೆ ಈ
ಮಹಾಶಿವರಾತ್ರಿಯಲ್ಲಿ ಮಂಗಳವಾಗಲಿ
- ಶಶಾಂಕ್ ಕೆ ಡಿ (೨೭-೦೨-೧೪)
No comments:
Post a Comment