Sunday, January 4, 2015

ಕನ್ನಡ ೪ - ಓಂ ಅಹಂ ಆಹುತಿಂ

ವಿವಿಧತೆ,ವಿಕಸನ,ಹೊಸತನಗಳನ್ನು 
ಪ್ರಕೃತಿಯಲ್ಲಿ ತುಂಬಿ 
ಅದನ್ನು ಅರಿಯಲು ಅನುಭವಿಸಲು 
ಪಂಚ ಇಂದ್ರಿಯಗಳನ್ನು ಕೊಟ್ಟು
ಇದನ್ನೇ ಸಂಪೂರ್ಣವೆನಿಸುವ 
ಮಾಯೆಯನ್ ಪಸರಿಸಿ 
ಇಂದ್ರಿಯಗಳು ತಿಳಿಸುವ ಜ್ಞಾನವನೆಲ್ಲಾ
ಅಹಂವೆಂಬ ಅಹಂಕಾರ ಅಂದಕಾರಗಳೊಳಗೆ 
ಬೆರೆಸಿ ಮಾನವ ಕುಲವನ್ನು 
ಕಟ್ಟಿಟ್ಟಿರುವ ಆ ಅಕಾಲನಿಗೆ ನಮನ

ಶರೀರ ಪ್ರಕೃತಿಯದಾದರು 
ಆತ್ಮ ಆ ಪರಮಾತ್ಮನದೆಂದು 
ತಿಳಿಯಲು ಬಿಡದ
ಈ ಅಹಂನ ಲೀಲಾಜಾಲವ
ಭೇದಿಸಿದವನೇ ಜ್ಞಾನಿ 
ಆ ಜ್ಞಾನಿಯ ಮೊದಲ ಮಂತ್ರವೇ 
ಓಂ ಅಹಂ ಆಹುತಿಂ 
ಸ್ವಯಂ ಸಮರ್ಪಂ ಸದಾಶಿವಂ

                               - ಶಶಾಂಕ್ ಕೆ ಡಿ (೨೭-೦೨-೧೪)

No comments:

Post a Comment